
28th July 2025
ಶೀರ್ಷಿಕೆ: *ಭಕ್ತಿಯ ಪರಾಕಾಷ್ಟೆ ಶ್ರಾವಣ ಮಾಸ*
ಶ್ರಾವಣ ಮಾಸ ಧಾರ್ಮಿಕ ದಿವಸವು
ಶುಭದಿನದ ಪೂಜೆಕಂಕೈರ್ಯವು
ಆಧ್ಯಾತ್ಮಿಕ ಕೀರ್ತನೆ ಪುರಾಣವು
ದೇವ ಸ್ಮರಣೆ, ಭಕ್ತಿ ಮಾರ್ಗವು
ಭಕ್ತರಿಗೆ ಶಾಂತಿ ನೆಮ್ಮದಿಯು
ನಿಗೂಢ ಅಗೋಚರ ಶಕ್ತಿಯು
ಹರಕೆಯು ಫಲಿಸಲು, ನಂಬಿಕೆಯು
ಭಗವಂತನಲ್ಲಿ ಶ್ರದ್ಧೆ ವಿಶ್ವಾಸವು
ನಾಗರ ಪಂಚಮಿ ಹಬ್ಬದಲ್ಲಿ
ಹೆಣ್ಣು ಮಕ್ಕಳು ಹಾಲೆರೆಯಲು
ನಾಗರ ದೇವರ ನೈವೇದ್ಯ ಅರ್ಪಿಸಲು
ಮಕ್ಕಳ ಭಾಗ್ಯ, ಕನಕ ವೃಷ್ಟಿಯ ಬೇಡಲು
ಶ್ರೀ ವರಮಹಾಲಕ್ಷ್ಮಿ ದೇವಿ ಹಬ್ಬವು
ಮನೆ ಮಂದಿಗೆ ಸಡಗರ ಸಂಭ್ರಮವು
ಶ್ರೀ ಲಕ್ಷ್ಮಿ ಕಟಾಕ್ಷ ಅಪೇಕ್ಷೆಯ ಮನವು
ಮುತ್ತೈದೆಯರಿಗೆ ಉಡಲಕ್ಕಿ ತುಂಬಿ ಸತ್ಕಾರವು
ಮನೆ ದೇವರ ಜಾತ್ರೆಗಳಲ್ಲಿ
ವೈಭವ ಭಕ್ತರ ಭಕ್ತಿಯು ಮನದಲ್ಲಿ
ಹೂ ಹಾರ ಪ್ರಸಾದ ಅರ್ಪಣೆ ಗುಡಿಯಲ್ಲಿ
ರಥೋತ್ಸವದ ವೀಕ್ಷಣೆ ಸಂಭ್ರಮದಲ್ಲಿ
✍️✍️
*ಶ್ರೀಮತಿ ಪಾರ್ವತಿದೇವಿ ಎಂ ತುಪ್ಪದ ಬೆಳಗಾವಿ*
ಡಾ. ರಾಜೇಂದ್ರ. ಟಿ. ಎಲ್.ತಲ್ಲೂರು ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯ ಪ್ರಮಾಣ ಪತ್ರ ವಿತರಣೆ
ಮಲ್ಲಯ್ಯ ಅಜ್ಜ ದೇವರ ನೂತನ ಸರಪಳಿ ಕಟ್ಟೆಯ ಸರಪಳಿ ಹರಿಯುವ ಕಲ್ಲು, ಪ್ರತಿಷ್ಠಾಪನೆ ಕಾರ್ಯಕ್ರಮ
ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ 'ನುಡಿ ತೆರಿಗೆ ನೂರೊಂದು ಕಾರ್ಯಕ್ರಮ' - ಶಿರಿಷ ಜೋಶಿಯವರ ಬಹುಮುಖ ಸಾಹಿತ್ಯಕ ಸೇವೆ ಶ್ಲಾಘನೀಯ.- ಡಾ. ಗುರುದೇವಿ ಹುಲ್ಲೆಪ್ಪನವರ ಮಠ